ಜೋಗದ ಜೋಗಿ ನೀನು

ಜೋಗದ ಜೋಗಿ ನೀನು
ಏಕೆ ಕಾಡುವೆ ನನ್ನನ್ನು
ನೀನು ನೀನಾಗಿರಲು ಜೋಗಿ
ನನಗಿಲ್ಲ ಚಿಂತೆ ಏನು

ಹೋಗು ಹೋಗೆಲೋ ಜೋಗಿ ಮುಂದಕೆ
ಹೊಟ್ಟೆಗಿಲ್ಲದೆ ಕಟ್ಟೆಯೇ ಆಸರೆ ಆಗಿದೆ
ಏನೆಂದು ಹೇಳಲೋ ಜೋಗಿ
ಏನನ್ನು ಕೊಡಲೋ ಜೋಗಿ

ಜೋಗಿ- ಜೀವನ ನಿನ್ನದ ಅವ್ವ
ಭಾವನ ನಿನ್ನದು
ಹೋಗೆನ್ನಬೇಡ ಅವ್ವ
ಕಟ್ಟೆಯೇ ಆಸರೆಯಾಗಿರಲೇಕೋ
ಪಟ್ಟ ಪಡಲೇಕೋ ಕಷ್ಟ
ಹಸಿರ ನೆಲದ ಅನಂತೆ ನೀನು
ಉಷೆಯಾಗಿಹೇ ನೀನವ್ವ
ಸಸಿಯೊಂದ ನೀಡಲೇ ಅವ್ವ
ಜೀವನ ಇಹುದು ಮುಂದಕೆ

ಒಡತಿ – ಹಸಿರ ಬಾಳಿನ ಹಂದರದೆ
ಹಸಿಯಾಗಿ ಹುದುಗಿದೆ ಮನವು
ಉಷೆ ನಾನಾಗಿರಲೇನು
ಶಶಿಯು ಇಲ್ಲದೆ ಜೋಗಿ
ಬೆತ್ತಲಾಗಿದೆ ಬಯಲು

ಜೋಗಿ – ಹಸಿರ ಬಾಳಿನ ಹಂದರದ
ನಿಮ್ಮ ಮಕ್ಕಳ ಬಾಳು ಬೆಳಗಲಿ
ಪಡದಿರು ಚಿಂತೆ ಅವ್ವ
ಉಷೆ ನೀನು ಕಿರಣವಾಗಿರು ಬಾಳಿಗೆ

ಒಡತಿ – ಹೊರೆ ಹೊತ್ತಿರುವೆ ಸಂಸಾರ
ಗಗನಕ್ಕೇರುವ ಮಾಳಿಗೆ ಸವತಿ
ತಿಳಿವಿಲ್ಲದೆ ಅರಿವಿಲ್ಲದೆ
ಬೆತ್ತಲಾಗಿದೆ ಬಾಳು
ಬತ್ತಿ ಹೋದವೋ ಕಂಗಳು
ಎದೆಯಾಳದ ನೋವ ಅರಸುತ್ತಾ
ಏನೆಂದು ಹೇಳಲೋ ಜೋಗಿ
ಉಷೆ ನಾನಾದರೇನು ಶಶಿ ಇಲ್ಲದ ಮೇಲೆ

ಜೋಗಿ – ಬಾಳ ಪಯಣದ ಬಾಗಿಲು ತೆರೆದು
ಭಾಗ್ಯಲಕ್ಷಿಯಾಗಿದೆ ಏಕೆ ಕೊರಗುವೆ?
ನೀ ಅವ್ವ…
ತುಂಗೆಯು ನೀನು ಗಂಗೆಯು ನೀನು
ಸತಿಯೆ ನಿನಗೇಕೆ ದಾಹ
ಅರಿವಿಲ್ಲದ ಪರಿವೆ ಏಕೆ ತಿಳಿಯೇ
ನೀನು ನೀನಾಗಲೇನು ಚೆಂದ
ಜೀವನ ಇಹುದು ಮುಂದಕೆ ಅವ್ವ

ಒಡತಿ – ಹೊಗಳಲೇಕೊ ಜೋಗಿ
ನನ್ನದೆನ್ನುವದೇನಿದೆಯೋ
ಭೂಮಿಯು ಬರಡಾಗಿದೆ
ಎನ್ನ ಮನವು ಮಸಕಾಗಿದೆ
ಅಕ್ಷಯ ಪಾತ್ರೆಯ ಹುಡುಕುತಿದೆ
ನಿಶೆಯಲ್ಲಿ ನಾನಾಗಿರಬೇಕು
ಶಶಿಯು ಇಲ್ಲದ ಮೇಲೆ ಜೋಗಿ

ಜೋಗಿ – ನಿನ್ನ ಅಂಗಳದಲ್ಲಿಹುದೆ ಪಾತ್ರೆ
ನಿನ್ನದೇನಿದೆಯೊ ಮಾಯೆ
ಒಂದು ಅಗಳು ಸಾಕೆನಗೆ
ನಾಳೆಗಾಗಿ ಕಾಯುವೆ ಮತ್ತೆ
ತುಂಬಲಿ ಮನೆಯು ಹರಸುವೆ ನಿನ್ನ
ಜೀವನ ಇಹುದೆ ಮುಂದಕೆ ಅವ್ವ

ಒಡತಿ – ನಿನ್ನ ನುಡಿಯಲಿಹುದೆ ಆಶಾಕಿರಣ
ನನ್ನ ಬಾಳಿಗೆ ನೀಡಲಿ ಕಿರಣ
ಚಾತಕ ಪಕ್ಷಿಯಂತೆ ಕಾಯುವೆ
ಹಿಡಿಯು ಹಿಡಿಯಲೇಕೂ ಜೋಗಿ
ನನ್ನ ಅಂಗಳವು ಹಸಿರಾಗಲಿ
ಹಿಡಿಯು ಅಕ್ಷಯವಾಗಲಿ
ಉಸಿರಾಗಲಿ ಸಸಿಗಳು
ನೀ ಬರುವ ತನಕ
ಹೋಗಿ ಬಾರೆಲೋ ಜೋಗಿ
ನಾಳೆಗಿನ ನೆನಪಿಗೆ
ನೀ ಹೋಗಿ ಬಾರಲೋ ಜೋಗಿ
ಉಷನಾಗಿದೆನೋ ಶಶಿಗಾಗಿ ಕಾಯುತಿರುವೆ
ನಿನ್ನ ಮಾತೇ ದೀವಿಗೆ
ನಡೆದು ಬಾ ಮತ್ತೆ
ಶಿಶಿರ ಬಂದ ಮೇಲೆ ಜೋಗಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಂಗುಸರು ಬಡಗಿ ಕೆಲಸ ಕಲಿಯಬೇಕೆ?
Next post ತೇಲು

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys